ದಾಂಡೇಲಿ : ಹುಬ್ಬಳ್ಳಿಯ ಅದರಗುಂಚಿಯಲ್ಲಿ ಇತ್ತೀಚೆಗೆ ನಡೆದ ಎರಡನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ದಾಂಡೇಲಿಯ ದಾಂಡೇಲಿ ಕರಾಟೆ ಕ್ಲಬ್ ಹಾಗೂ ದಾಂಡೇಲಿ ಕರಾಟೆ ಕ್ಲಾಸಸ್ ಇಲ್ಲಿನ 23 ಕರಾಟೆ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ, ವಿವಿಧ ವಿಭಾಗಗಳಲ್ಲಿ ಬಹುಮಾನವನ್ನು ಗಿಟ್ಟಿಸಿ ಸಾಧನೆಯನ್ನು ಮೆರೆದಿದ್ದಾರೆ.
ಈ ಪಂದ್ಯಾವಳಿಯಲ್ಲಿ ದಾಂಡೇಲಿ ಕರಾಟೆ ಕ್ಲಬ್ ಹಾಗೂ ದಾಂಡೇಲಿ ಕರಾಟೆ ಕ್ಲಾಸಸ್ ವಿದ್ಯಾರ್ಥಿಗಳಾದ ಯುವರಾಜ ಸನದಿ, ಶ್ರವಣ್ ಬೋಕಾಡೆ, ಅರ್ಷ್ ತಹಶೀಲ್ದಾರ್, ಮಹಮ್ಮದ್ ಸಾದ್, ವನ್ಸ್ ವಾಟೇಕರ, ಆರಾಧ್ಯ ವಾಟೇಕರ, ಜೈ ಪಾಟೀಲ್, ತನ್ವಿರ್ ಶಿಲೇದಾರ, ವರುಣ್ ಪಾಟೀಲ್, ಸ್ವಯಂ ನಾಯ್ಕ, ಪ್ರೀತಂ ಚಲವಾದಿ, ಏಬಲ್ ಪ್ರಕಾಶ್, ರೀಮಾ, ಸಂತೋಷ ಆಚಾರಿ, ಅಭಿನವ ಗುಲಗಂಜಿ, ಅಮೃತಾ ನರೇಗಲ್, ಶ್ವೇತಾ ದೇವರ, ಇಕ್ರಾ ಜಂಬಗಿ, ಸುಪ್ರಿಯಾ ತಲಪಾಟಿ, ಜಾಹೇದ್ ಜಂಬಗಿ, ಸ್ವೀಟಿ ಬಾಬುರಾವಕರ, ಶ್ರೇಯಾ ಕಾಂಬಳೆ ಮತ್ತು ತನಿಷಾ ಮಡಗಾವ ಇವರು ಭಾಗವಹಿಸಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಚಿನ್ನದ ಪದಕ, ಬೆಳ್ಳಿಯ ಪದಕ ಮತ್ತು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಕರಾಟೆ ಮುಖ್ಯ ಶಿಕ್ಷಕರಾದ ಯಾಕುಬ್ ಶೇಖ ಮತ್ತು ರಿಯಾಜ್ ಬೀಡಿಕರ್ ತರಬೇತುದಾರರಾಗಿರುತ್ತಾರೆ. ಕರಾಟೆ ವಿದ್ಯಾರ್ಥಿಗಳ ಈ ಸಾಧನೆಗೆ ಮತ್ತು ಈ ಸಾಧನೆಗೆ ಕಾರಣರಾದ ಕರಾಟೆ ಶಿಕ್ಷಕರಿಗೆ ನಗರದ ಗಣ್ಯರನೇಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.